ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ (ನಿ), (ಕೆ.ವಿ.ಸಿ.ಡಿ.ಸಿ).
2013-14ನೇ
ಸಾಲಿನ ಸನ್ಮಾನ್ಯ ಮುಖ್ಯಮಂತ್ರಿಯವರ ಆಯವ್ಯಯ ದಿನಾಂಕ: 12/07/2013ರ
ಭಾಷಣದಲ್ಲಿ ಶಿಲ್ಪಕಲೆ, ಲೋಹ ಮತ್ತು ಮರಗೆಲಸಗಳಲ್ಲಿ
ತೊಡಗಿರುವ ಕುಶಲಕರ್ಮಿಗಳಿಗೆ ಹಣಕಾಸಿನ ಸಹಾಯ ನೀಡುವ
ಸಲುವಾಗಿ ವಿಶ್ವಕರ್ಮ ಅಭಿವೃದ್ದಿ ನಿಗಮವನ್ನು ಸ್ಥಾಪಿಸಲಾಗುವುದು. ಇದಕ್ಕಾಗಿ ಆರಂಭಿಕವಾಗಿ ರೂ.5.00 ಕೋಟಿಗಳನ್ನು ಒದಗಿಸಲಾಗುವುದು
ಎಂದು ಘೋಷಿಸಲಾಗಿದೆ.
ಸರ್ಕಾರದ ಆದೇಶದ ಸಂಖ್ಯೆ:
ಹಿಂವಕ/233/ಬಿಸಿಎ/2013, ಬೆಂಗಳೂರು ದಿನಾಂಕ: 03/02/2014ರನ್ವಯ ಕರ್ನಾಟಕ ವಿಶ್ವಕರ್ಮ
ಸಮುದಾಯಗಳ ಅಭಿವೃದ್ದಿ ನಿಗಮ (ನಿ)ವನ್ನು
1956ರ ಕಂಪನಿ ಕಾಯ್ದೆ ಅನ್ವಯ
ದಿನಾಂಕ: 28/02/2014ರಂದು ನೊಂದಣಿ ಮಾಡಿಸುವ
ಮೂಲಕ ಸ್ಥಾಪನೆ ಮಾಡಲಾಗಿದೆ.